ಸಿಲಿಕಾನ್ ಸಿಟಿಯಲ್ಲಿ ಪೋಲೀಸ್ ಫೈರಿಂಗ್, ಇಬ್ಬರು ಸರಗಳ್ಳರ ಬಂಧನ
ಬೆಂಗಳುರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಪೋಲೀಸ್ ಗುಂಡಿನ ಸದ್ದು ಕೇಳಿದೆ. ಬೆಂಗಳೂರು ಉತ್ತರ ವಿಭಾಗದ ಪೊಲೀಸರು ದೆಹಲಿ ಮೂಲದ ಇಬ್ಬರು ಕುಖ್ಯಾತ ಅಂತರಾಜ್ಯ ಸರಗಳ್ಳರ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ.
ಸೋಮವಾರ ಬೆಳಿಗ್ಗೆ ಬೆಂಗಳೂರು ಹೊರವಲಯದ ಸಾಸಿವೆಘಟ್ಟದ ಸಮೀಪ ನಡೆದ ಕಾರ್ಯಾಚರಣೆಯಲ್ಲಿ ಸುರೇಂದರ್ ಮತ್ತು ಕರಣ್ ಎಂಬಿಬ್ಬರು ಸರಗಳ್ಳರನ್ನು ಬಂಧಿಸಲಾಗಿದೆ.
ಉತ್ತರ ವಿಭಾಗದ ವ್ಯಾಪ್ತಿಯಲ್ಲಿ ಸರಗಳ್ಳತನದಲ್ಲಿ ಸಕ್ರಿಯರಾಗಿದ್ದಾರೆನ್ನುವ ಖಚಿತ ಮಾಹಿತಿ ಪಡೆದ ಪೋಲೀಸರು ಸಿನಿಮೀಯ ಮಾದರಿಯಲ್ಲಿ ಕಳ್ಳರನ್ನು ಚೇಸ್ ಮಾಡಿದ್ದಾರೆ.
ನಂದಿನಿ ಲೇಔಟ್, ಬಾಗಲಗುಂಟೆ, ಸೋಲದೇವನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಕಳ್ಳರು ಪೋಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ತಕ್ಷಣ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದ ಪೋಲೀಸರು ಮೊದಲಿಗೆ ಕಳ್ಳರಿಗೆ ಎಚ್ಚರುಇಕೆ ಕೊಟ್ಟಿದ್ದಾರೆ. ಆದರೆ ಕಳ್ಲರು ಪೋಲೀಸರ ಮಾತಿಗೆ ಗಮನ ನೀಡದೆ ಹೋದಾಗ ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಈ ವೇಳೆ ನಾಲ್ವರು ಪೋಲೀಸರಿಗೆ ಸಹ ಗಾಯಗಳಾಗಿದೆ.
ಆರೋಪಿಗಳು ಬೆಂಗಳೂರಿನ ಇಪ್ಪತ್ತಕ್ಕೂ ಹೆಚ್ಚು ಕಡೆ ಸರ ಕಳ್ಳತನ ನಡೆಸಿದ್ದರು. ಇವರ ಮೇಲೆ ದೆಹಲಿ ಸೇರಿ ದೇಶದ ನಾನಾ ನಗರಗಳಲ್ಲಿ ದೂರುಗಳು ದಾಖಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ. (KANNADA PRABHA)