ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶದ ಹೋರಾಟವನ್ನು ಬೆಂಬಲಿಸುವ ನಿಧಿ ಸಂಗ್ರಹ ಯೋಜನೆಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ 2 ಕೋಟಿ ರೂ. ದೇಣಿಗೆಯನ್ನು
ನೀಡಿದ್ದಾರೆ.
ಅಂತರ್ ಜಾಲದ ಮೂಲಕ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಭಾರತದ ಬೃಹತ್ ಅಂತರ್ಜಾಲ ಸೈಟ್ ಆಗಿರುವ 'ಕೆಟೊ' ಮೂಲಕ ಅವರಿಬ್ಬರು ದೇಣಿಗೆ ಸಂಗ್ರಹಿಸುತ್ತಿದ್ದು, ದೇಶದಲ್ಲಿನ ಕೋವಿಡ್-19 ಪರಿಹಾರಕ್ಕಾಗಿ 7 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಈ ಉದ್ದೇಶಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನವನ್ನು ಆರಂಭಿಸಿರುವುದಾಗಿ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಕೆಟೊನಲ್ಲಿ ಏಳು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಅಭಿಯಾನದಿಂದ ಸಂಗ್ರಹಿಸಿದ ಹಣವನ್ನು ಆಕ್ಸಿಜನ್, ವೈದ್ಯಕೀಯ ಮಾನವ ಸಂಪನ್ಮೂಲ, ಲಸಿಕೆ ಬಗ್ಗೆ ಅರಿವು ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಕೋವಿಡ್-19 ಸಾಂಕ್ರಾಮಿಕ ಕಾಣಿಸಿಕೊಂಡಾಗಿನಿಂದಲೂ ನಮ್ಮ ಆರೋಗ್ಯ ಸವಾಲು ಎದುರಿಸುತ್ತಿದ್ದು, ನಾವೆಲ್ಲ ಒಗ್ಗೂಡುವ ಅಗತ್ಯವಿದೆ ಮತ್ತು ನಮ್ಮ ದೇಶಕ್ಕಾಗಿ ನೆರವು ನೀಡಬೇಕಾಗಿದೆ ಎಂದು ಕೊಹ್ಲಿ ಇನ್ಸಾಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದು, ಕೋವಿಡ್-19 ಪರಿಹಾರಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಘೋಷಿಸಿದ್ದೇವೆ. ನಮ್ಮ ಬೆಂಬಲಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.
View this post on Instagram
ಒಗ್ಗೂಡದಿದ್ದಲ್ಲಿ ಕೋವಿಡ್-19 ವಿರುದ್ಧ ಗೆಲುವು ಅಸಾಧ್ಯ, ನಮ್ಮ ಅಭಿಯಾನದಲ್ಲಿ ಜೊತೆಯಾಗಿ ಎಂದು ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮನವಿ ಮಾಡಿಕೊಂಡಿದ್ದಾರೆ.
(KANNADA PRABHA)