X Close
X

ಕೇಸರಿ ಶಾಲು ಹೊದಿಸಿದ್ದಕ್ಕೆ ಕೆಂಡಾಮಂಡಲ: ಬೆಂಬಲಿಗ ಕೊಟ್ಟ 'ಕುರಿ' ಸ್ವೀಕರಿಸಿದ ಸಿದ್ದರಾಮಯ್ಯ


siddaramaiah1
Bengaluru:

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲಿ ವ್ಯಕ್ತಿಯೊಬ್ಬ ಕೇಸರಿ ಶಾಲು ಹೊದಿಸಲು ಮುಂದಾಗಿದ್ದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು.

ಕಾಟರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಆಗಮಿಸಿ ಕೇಸರಿ ಶಾಲನ್ನು ಹೊದಿಸಲು ಪ್ರಯತ್ನಿಸಿದ್ದಾನೆ,
ಆಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ಸಿದ್ದರಾಮಯ್ಯ ಅವರ ಈ ವರ್ತನೆ ಅಲ್ಲಿ ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದೆ, ಕೇಸರಿ ಶಾಲು ಹೊದಿಸಲು ಬಂದ ವ್ಯಕ್ತಿ ಜನರ ಗುಂಪಿನ ಮದ್ಯೆ ಪರಾರಿಯಾಗಿದ್ದಾನೆ, ಸಿದ್ದರಾಮಯ್ಯ ಅವರ ಮತ್ತೊಬ್ಬ
ಬೆಂಬಲಿಗ ಕುರಿಯನ್ನು ಉಡುಗೊರೆಯಾಗಿ ನೀಡಿದ, ಅದನ್ನು ಸ್ವೀಕರಿಸಿದ ಅವರು ಆತನಿಗೆ ಆಶೀರ್ವದಿಸಿದರು.

ಒಂದೆರಡು ವರ್ಷಗಳ ಹಿಂದೆ ಇದೇ ರೀತಿಯ ಘಟನೆಯಲ್ಲಿ, ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯನವರ ಹಣೆಗೆ ಕೇಸರಿ ತಿಲಕವನ್ನು ಹಾಕಲು ಪ್ರಯತ್ನಿಸಿದ ಪೂಜಾರಿಯೊಂದಿಗೆ ಸಿದ್ದರಾಮಯ್ಯ ಮಾತಿನ
ಚಕಮಕಿ ನಡೆಸಿದ್ದರು.