ಉಡುಪಿ: –‘ಪರ್ಯಾಯ 2020’ ರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಬುಧವಾರ ಬಿಡುಗಡೆ ಮಾಡಿದೆ.
ಲಕೋಟೆ ಮೇಲೆ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮತ್ತು ಈಶಪ್ರಿಯ ತೀರ್ಥ ಸ್ವಾಮೀಜಿಯವರ ಚಿತ್ರಗಳಿವೆ.
ಉಡುಪಿ ಅಂಚೆ ವಿಭಾಗದ ಅಧೀಕ್ಷಕ ಸುಧಾಕರ್ ದೇವಡಿಗಾ ಮಾತನಾಡಿ, ಶ್ರೀ ಕೃಷ್ಣ ಮಠದೊಂದಿಗೆ ಇಲಾಖೆಯು ಒಡನಾಟದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಮಠದ ಪ್ರಮುಖ ಸಂದರ್ಭಗಳಲ್ಲಿ ಇಲಾಖೆ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತಿದೆ. ಪರ್ಯಾಯಕ್ಕೆ 250 ವರ್ಷ ತುಂಬುತ್ತಿರುವುದರಿಂದ ಈ ಲಕೋಟೆ ವಿಶೇಷವೆನಿಸಿದೆ. ಅಂಚೆ ಇಲಾಖೆಯು ‘ಮೈ ಸ್ಟ್ಯಾಂಪ್’ ಕಾರ್ಯಕ್ರಮವನ್ನು ಪ್ರಾರಂಭಿಸಿದೆ, ಇದರಲ್ಲಿ ಜನರು ತಮ್ಮೊಂದಿಗೆ ಅಥವಾ ಅವರ ಪ್ರೀತಿಪಾತ್ರರ ಭಾವಚಿತ್ರವಿರುವ ಸ್ಟಾಂಪ್ ಪಡೆಯಬಹುದು. ಈ ಅಂಚೆಚೀಟಿಗಳಿಗೆ 300 ರೂ.ವೆಚ್ಚ ತಗುಲುತ್ತದೆ ಎಂದು ಹೇಳಿದ್ದಾರೆ.